Home » August 20th, 2011
Entries posted on “August 20th, 2011”
ನವದೆಹಲಿ : ಮೆಗಾಸ್ಟಾರ್ ಚಿರಂಜೀವಿ ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು . ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಕಾಂಗ್ರೆಸ್ ಸದಸ್ಯತ್ವವನ್ನು ಸ್ವೀಕರಿಸುವುದರ ಮೂಲಕ ತಾನು ಕಾಂಗ್ರೆಸ್ ಸೇರುವುದರ ಜೊತೆಗೆ ತನ್ನ ಪ್ರಜಾರಾಜ್ಯಂ ಪಕ್ಷವನ್ನು ಕಾಂಗ್ರೆಸ್ಸಿನಲ್ಲಿ ವಿಲೀನಗೊಳಿಸಿದರು. ಈ ಸಂದರ್ಭದಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ , ಆಂಧ್ರ ಪ್ರದೇಶದ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಗುಲಾಂ ನಬಿ ಆಜಾದ್ , ಕೇಂದ್ರ ಸಚಿವ ಜೈಪಾಲ್ ರೆಡ್ಡಿ , ಕಾಂಗ್ರೆಸ್ ಅಧ್ಯಕ್ಷರ ರಾಜಕೀಯ ಕಾರ್ಯದರ್ಶಿ [...]
August 20th, 2011 | Posted in ರಾಷ್ಟ್ರೀಯ ಸುದ್ದಿಗಳು | Read More »
ಮಂಗಳೂರು : ಶ್ರೀರಾಮ ಸೇನೆಯ ಜಿಲ್ಲಾ ನಾಯಕರಾಗಿದ್ದ ಪ್ರವೀಣ್ ವಾಲ್ಕೆ ಅವರ ಪುತ್ರಿ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ . ಪ್ರವೀಣ್ ವಾಲ್ಕೆ ಅವರ ಪುತ್ರಿ ನಗರದ ಪ್ರತಿಷ್ಠಿತ ಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿನಿ ನಿಧಿ ನಗರದ ಡೋಂಗರ ಕೇರಿಯ ಮನೆಯ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಕೆಲ ಮೂಲಗಳ ಪ್ರಕಾರ ನಿಧಿ ತನ್ನ ಗೆಳತಿಯ ಮನೆಗೆ ಹೋಗಲು ಕೋರಿದಾಗ ತಾಯಿ [...]
August 20th, 2011 | Posted in ದಕ್ಷಿಣ ಕನ್ನಡ | Read More »
ಅಣ್ಣಾ ಹಜಾರೆ ಪ್ರಾಮಾಣಿಕರು, ಭ್ರಷ್ಟಾಚಾರದ ವಿರುದ್ಧದ ಹೋರಾಟದ ಕುರಿತ ಅವರ ಬದ್ಧತೆ ಪ್ರಶ್ನಾತೀತ. ಕಾಂಗ್ರೆಸ್ ನಾಯಕರು ಮತ್ತು ಯುಪಿಎ ಸರ್ಕಾರ ಏನೇ ಹೇಳಲಿ, ಟೀಂ ಅಣ್ಣಾ ಮೇಲೆ ಏನೇ ಗೂಬೆ ಕೂರಿಸಲಿ ಅದು ಅಣ್ಣಾ ಹಜಾರೆಯವರ ನ್ಯಾಯನಿಷ್ಠೆಗೆ ಧಕ್ಕೆಯುಂಟು ಮಾಡಲಾರದು. ಆದರೆ ಈ ಸಂದರ್ಭದಲ್ಲಿ ನಾವೆಲ್ಲರೂ ಕೇಳಿಕೊಳ್ಳಲೇಬೇಕಾದ ಬಹುಮುಖ್ಯ ಪ್ರಶ್ನೆಯೊಂದಿದೆ. ಪ್ರಾಮಾಣಿಕತೆ, ಬದ್ಧತೆ ಹಾಗೂ ನ್ಯಾಯನಿಷ್ಠೆಗಳು ಮಾತ್ರ ಒಂದು ಚಳವಳಿಯನ್ನು ಯಶಸ್ವಿಗೊಳಿಸುತ್ತವಾ? ಈ ಕುರಿತು ನನ್ನ ಅಭಿಪ್ರಾಯ ಹಂಚಿಕೊಳ್ಳುವ ಮುನ್ನ ಹೇಳಿಬಿಡುತ್ತೇನೆ. ಜನಲೋಕಪಾಲ ಜಾರಿಗಾಗಿ ಬೆಂಗಳೂರಿನಲ್ಲಿ ಚಳವಳಿ [...]
August 20th, 2011 | Posted in ಲೇಖನಗಳು | Read More »
ಭಾರತೀಯರಿಗೆ ಸ್ವಾತಂತ್ರ್ಯ ಎನ್ನುವುದು ಮರೀಚಿಕೆಯಾಗಿದೆಯೇ ? ಈ ಸಂದೇಹ ಯಾಕೆ ಬಂತು ಅಂತ ಕೇಳ್ತೀರಾ….. ಆಗಸ್ಟ್ ೧೫ ರಂದು ಪುತ್ತೂರಿನಲ್ಲಿ ನಡೆಯಬೇಕಾದ ಫ್ರೀಡಂ ಪೆರೇಡ್ ನಡೆಸಲು ಅನುಮತಿ ನೀಡಿಲ್ಲ! ಇದು ಭಾರತೀಯರಿಗೆ ಒಂದು ನಾಚಿಕೆಗೇಡಿನ ವಿಷಯ. ಭಾರತದಲ್ಲಿಯೇ ಭಾರತೀಯರಿಗೆಯೇ ಸ್ವಾತಂತ್ರ್ಯೋತ್ಸವ ನಡೆಸಲು ಅನುಮತಿ ನೀಡಿಲ್ಲ ಅನ್ನುವುದು ಅತ್ಯಂತ ನಾಚಿಕೆಗೇಡಿನ ವಿಷಯವಾಗಿದೆ. ನಿಜವಾಗಿ ಹೇಳಬೇಕಾದರೆ ಒಂದು ರಾಷ್ಟ್ರೀಯ ಹಬ್ಬವನ್ನು ಆಚರಿಸಲು ಯಾವುದೇ ರೀತಿಯ ಅನುಮತಿಯನ್ನು ಪಡೆಯಬೇಕಾಗಿಲ್ಲ. ಅನುಮತಿಯನ್ನು ಕೇಳಬೇಕೆಂಬುದು ಒಂದು ಅಭಾಸವೆನ್ನುವಂತಿದೆ. ಸಾಮಾಜಿಕ ಹಾಗೂ ದೇಶದ ಸಂಪೂರ್ಣ ಬದಲಾವಣೆಗೆ [...]
August 20th, 2011 | Posted in ಲೇಖನಗಳು | Read More »
ಅಲ್ ಖೋಬರ್ ( ಸೌದಿ ಅರೇಬಿಯಾ) : ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ಅಲ್ ಖೋಬರ್ -ದಮ್ಮಾಮ್ ಘಟಕ ಇದರ ವತಿಯಿಂದ ನಾಲ್ಕು ದಿವಸಗಳ ಪವಿತ್ರ ಉಮ್ರಾ ಯಾತ್ರೆಯನ್ನು ಈದ್ ದಿವಸ ಹಮ್ಮಿಕೊಳ್ಳಲಾಗಿದೆ. ಅಂದು ಸಂಜೆ ೩ ಗಂಟೆಗೆ ಉಮ್ರಾ ಯಾತ್ರೆ ಹೊರಡಲಿದೆ. ಉಮ್ರಾ ನಿರ್ವಹಿಸಲು ಬಯಸುವ ಯಾತ್ರಾರ್ಥಿಗಳು ಈ ಕೆಳಗಿನ ದೂರವಾಣಿ ಸಂಖೆಯನ್ನು ಸಂಪರ್ಕಿಸಲು ಸಂಘಟಕರು ಕೋರಿದ್ದಾರೆ. ಫಯಾಜ್ ೦೫೫೬೭೦೯೫೧೬ ,ಇಝುದ್ದೀನ್ ಕಾವು ೦೫೮೧೨೨೫೧೮೬ ವರದಿ : ಅನ್ಸಾರ್ ಬೆಳ್ಳಾರೆ. vknewz.com
August 20th, 2011 | Posted in ಗಲ್ಫ್ ಸುದ್ದಿಗಳು | Read More »
ಮಂಗಳೂರು:ಅಣ್ಣಾ ಹಜಾ ರೆಯವರ ಹೋರಾಟಕ್ಕೆ ಬೆಂಬಲ ನೀಡುವ ಸಲುವಾಗಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಲು ಕಾಲೇಜಿಗೆ ಚಕ್ಕರ್ ಹೊಡೆದ ಕಾರಣಕ್ಕಾಗಿ ಶಾಲೆ ಅಮಾನತು ಮಾಡುವ ಬೆದರಿಕೆಯಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ನಿನ್ನೆ ಎಬಿವಿಪಿ ನೇತೃತ್ವದಲ್ಲಿ ಅಲೋಸಿ ಯಸ್ ಕಾಲೇಜ್ ಎದುರು ಪ್ರತಿಭಟನೆ ನಡೆಸಿದ ಘಟನೆ ವರದಿಯಾಗಿದೆ. ಆದರೆ ಶಾಲೆಯ ಪ್ರಾಂಶುಪಾಲರು ಅಮಾನತು ಆದೇಶ ಸುಳ್ಳು ಎಂದಿದ್ದಾರೆ. ಪ್ರತಿಭಟನೆಗೆ ಹೋಗಲು ಒಂದು ದಿನ ರಜೆ ನೀಡಲಾಗಿತ್ತು. ಆದರೆ ಮಾರನೆ ದಿನ ಮತ್ತೆ ಶಾಲೆಗೆ ಚಕ್ಕರ್ ಹೊಡೆದು ಪ್ರತಿಭಟನೆಗೆ ಹೋದ ವಿದ್ಯಾರ್ಥಿಗಳ ಬಗ್ಗೆ [...]
August 20th, 2011 | Posted in ದಕ್ಷಿಣ ಕನ್ನಡ | Read More »
ಅಹಮದಾಬಾದ್ : ದುಬೈನಲ್ಲಿ ಭಾರತೀಯ ಮೂಲದ ಕುಟುಂಬವೊಂದರ ಮನೆಯಲ್ಲಿ ನೌಕರನಾಗಿದ್ದುಕೊಂಡು ಅವರ ಮನೆಯ ಹದಿಹರೆಯದ ಬಾಲಕಿ ಮತ್ತು ಆಕೆಯ ತಾಯಿಯ ಮೇಲೆ ಅತ್ಯಾಚಾರ ನಡೆಸಿ ಆ ಕುಟುಂಬದ ಐವರನ್ನು ಕೊಂದು ಭಾರತಕ್ಕೆ ಪರಾರಿಯಾಗಿದ್ದ ವ್ಯಕ್ತಿಗೆ ಸಿಬಿಐ ವಿಶೇಷ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿದೆ. ರವಿಜಿ ಮನು ಪವಾರ್ ಎಂಬ ಈ ಪಾತಕಿ ದುಬೈನ ಬ್ಯಾಂಕ್ ಉದ್ಯೋಗಿಯಾಗಿದ್ದ ರಮೇಶ್ ಸಾಗರ್ ಎಂಬುವವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ೧೯೯೨ ಜನವರಿ ನಾಲ್ಕರಂದು ತನ್ನ ಶಾಲೆ ಮುಗಿಸಿ ದುಬೈನ ಕರಾಮದಲ್ಲಿರುವ [...]
August 20th, 2011 | Posted in ರಾಷ್ಟ್ರೀಯ ಸುದ್ದಿಗಳು | Read More »
ವರದಿ : ಉಮ್ಮರ್, ಈಶ್ವರಮಂಗಳ.
August 20th, 2011 | Posted in ಗಲ್ಫ್ ಸುದ್ದಿಗಳು | Read More »
ದುಬೈ, ಆಗಸ್ಟ್ 20 : ಕನ್ನಡ ಕೂಟ ಯು.ಎ.ಇ. ವತಿಯಿಂದ ಇಫ್ತಾರ್ ಕೂಟವು ದಿನಾಂಕ ೧೯.೦೮.೨೦೧೧ ನೇ ಶುಕ್ರವಾರ ಬರ್ ದುಬೈಯಲ್ಲಿರುವ ರಿಚ್ಮಂಡ್ ಹೋಟೆಲ್ ನ ಸಭಾಂಗಣದಲ್ಲಿ ಏರ್ಪಡಿಸಿದ್ದರು. ಇಫ್ತಾರ್ ಕೂಟಕ್ಕೆ ಸುಮಾರು ಎಪ್ಪತ್ತಕ್ಕೂ ಹೆಚ್ಚು ಸದಸ್ಯರು ಮತ್ತು ಅತಿಥಿಗಳು ಆಗಮಿಸಿದ್ದರು. ಸರಳ ಆಹಾರದೊಂದಿಗೆ ಹತ್ತೊಂಭತ್ತನೇ ಉಪವಾಸ ಪೂರ್ಣಗೊಳಿಸಿದ ಮುಸ್ಲಿಂ ಬಾಂಧವರು ಮಗ್ರಿಬ್ ನಮಾಜು ಮುಗಿಸಿ ಬಂದ ಬಳಿಕ ಸಭಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಸಭಾ ಕಾರ್ಯಕ್ರಮದಲ್ಲಿ ಕನ್ನಡ ಕೂಟ ಯು.ಎ.ಇ. ಸಂಘಟನೆಯ ಅಧ್ಯಕ್ಷರಾದ ಶ್ರೀ ಈರಣ್ಣ ಮೂಲಿಮನಿಯವರು ಸದಸ್ಯರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಬಳಿಕ ಕನ್ನಡ ಕೂಟದ ಸದಸ್ಯರಲ್ಲೊಬ್ಬರಾದ ಶ್ರೀ [...]
August 20th, 2011 | Posted in ಗಲ್ಫ್ ಸುದ್ದಿಗಳು | Read More »