ಉಡುಪಿ: ಆಕಾಶವಾಣಿ ಹಬ್ಬ..
ಉಡುಪಿ: ಪ್ರಸಾರ ಭಾರತಿ ಮತ್ತು ಮಂಗಳೂರು ಆಕಾಶವಾಣಿ ಆಯೋಜಿಸಿದ ‘ಆಕಾಶವಾಣಿ ಹಬ್ಬ’ ದ ಎರಡನೇ ದಿನದ ಕಾರ್ಯಕ್ರಮವು ಉಡುಪಿ ಎಂ.ಜಿ.ಎಂ. ಕಾಲೇಜಿನ ನೂತನ ರವೀದ್ರ ಮಂಟಪದಲ್ಲಿ ಫೆ.13 ರಂದು ನಡೆಯಿತು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ.ಎ.ವಿ.ನಾವಡ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ.ಹೇರಂಜೆ ಕೃಷ್ಣ ಭಟ್ ಹಾಗೂ ಎಂ.ಜಿ.ಎಂ.ಕಾಲೇಜಿನ ಪ್ರಾಂಶುಪಾಲರಾದ ಡಾ.ಪಿ.ವೆಂಕಟ್ರಮಣ ಗೌಡ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.





