“Author Archive”
Stories written by ( ವಿಶ್ವ ಕನ್ನಡಿಗ ನ್ಯೂಸ್ )
ಸೋಶಿಯಲ್ ಎಜುಕೇಶನಲ್ ವೆಲ್ಫೇರ್ ಅಸ್ಸೋಸಿಯೆಷನ್ (SKMWA) ವತಿಯಿಂದ ಉಡುಪಿ ಹಾಗೂ ದ. ಕ. ಜಿಲ್ಲೆಯ ಅರ್ಹ ಬಡ ಮುಸ್ಲಿಂ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಿದೆ. 2012-13 ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 70 ಮತ್ತು ಅದಕ್ಕಿಂತ ಹೆಚ್ಚು ಅಂಕ ಪಡೆದಿರುವವರು ಅರ್ಜಿ ಸಲ್ಲಿಸಬಹುದು. ಅರ್ಹರು ತಮ್ಮ ದ್ವಿತೀಯ ಪಿಯುಸಿ ಹಾಗು ಏಸೆಸೆಲ್ಸಿ ಅಂಕ ಪಟ್ಟಿಯುಂದಿಗೆ ಜಮಾತ್ ನಿಂದ ದ್ರಡಿಕರಣ ಪತ್ರ, ವಿಳಾಸ, ದೂರವಾಣಿ ಸಂಖ್ಯೆ, ಭಾವಚಿತ್ರ, ಪ್ರಸ್ತಾಪಿತ ಕೋರ್ಸ್, ಕಾಲೇಜಿನ ವಿವರ ಮತ್ತು [...]
May 20th, 2013 | Posted in ದಕ್ಷಿಣ ಕನ್ನಡ,ರಾಜ್ಯ ಸುದ್ದಿಗಳು | Read More »

ದೇವರಾಜ ಅರಸುರವರು ನಮ್ಮ ರಾಜ್ಯದ ಮುಖ್ಯಮಂತ್ರಿಗಳಾಗಿ ಉತ್ತಮ ಆಡಳಿತ ನಡೆಸಿದರು. ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ತಂದು ಕೊಟ್ಟವರು. ಮುಖ್ಯಮಂತ್ರಿಗಳಾಗಿ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಾಜ್ಯವನ್ನು ಮುನ್ನೇಡಿಸಿದವರು. ದೇವರಾಜ ಅರಸುರವರು ತಮ್ಮ ಅಧಿಕಾರವಧಿಯಲ್ಲಿ ಮಾಜಿ ಪ್ರಧಾನ ಮಂತ್ರಿ ಇಂದಿರಾಗಾಂಧಿಯವರು ಚಾಲನೆಗೆ ತಂದ ೨೦ ಅಂಶಗಳ ಕಾರ್ಯಕ್ರಮವನ್ನು ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಅನುಷ್ಠಾನಗೊಳಿಸುವ ಮೂಲಕ ಬಡವರು ಹಿಂದುಳಿದ ವರ್ಗಗಳಿಗೆ ಅನುಕೂಲವಾಗುವಂತೆ ಪ್ರತ್ಯೇಕ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಿ ಆ ವರ್ಗಗಳ ಮಕ್ಕಳಿಗೆ ಪ್ರತ್ಯೇಕ ಹಾಸ್ಟೆಲ್, ವಿದ್ಯಾರ್ಥಿ [...]
May 20th, 2013 | Posted in Editor Only,ಲೇಖನಗಳು | Read More »
ಭದ್ರಾವತಿ: ಚುನಾವಣೆ ಮುಗಿದು ಫಲಿತಾಂಶ ಪ್ರಕಟಗೊಂಡು ಎರಡು ತಿಂಗಳು ಕಳೆದರೂ ಸಹ ಇನ್ನೂ ಆಡಳಿತ ಭಾಗ್ಯ ಕಾಣದಿರುವ ಇಲ್ಲಿನ ನಗರಸಭೆ ಸದಸ್ಯರಿಗೆ ಒಂದೆಡೆ ಯಾವಾಗ ಆಡಳಿತ ಕೈ ಸಿಗುವುದೋ ಎಂಬ ಚಿಂತೆ, ಮತ್ತೊಂದೆಡೆ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದು ಆಡಳಿತ ಚುಕ್ಕಾಣಿ ಹಿಡಿದರು ಸಹ ‘ಕೈಗೆ ಬಂದದ್ದು, ಬಾಯಿಗೆ ಬರಲಿಲ್ಲ’ ಎಂಬ ಸ್ಥಿತಿ ಎದುರಾಗಿರುವುದು ಚಿಂತೆಯಾಗಿ ಕಾಡತೊಡಗಿದೆ. ನಗರಸಭಾ ಚುನಾವಣೆಯಲ್ಲಿ ಅಪ್ಪಾಜಿ ನೇತೃತ್ವದಲ್ಲಿ ಜೆಡಿಎಸ್ ಪಕ್ಷದ ೨೩ ಸದಸ್ಯರು ಗೆಲುವು ಸಾಧಿಸುವ ಮೂಲಕ ನಗರಸಭೆ ಆಡಳಿತವನ್ನು ಈಗಾಗಲೇ [...]
May 19th, 2013 | Posted in ರಾಜ್ಯ ಸುದ್ದಿಗಳು,ಶಿವಮೊಗ್ಗ | Read More »

ಸಿರಾ: ಸರ್ಕಾರಿ ಶಾಲೆಯಲ್ಲಿ ಸಾಮಾನ್ಯ ರೈತನ ಮಗನೂ ವಿದ್ಯಾಭ್ಯಾಸ ಮಾಡುತ್ತಾನೆ, ರಾಷ್ಟ್ರದ ಪ್ರಧಾನಿ ಮಗನೂ ವ್ಯಾಸಂಗ ಮಾಡುತ್ತಾನೆ. ಆದ್ದರಿಂದ ಸರ್ಕಾರಿ ಶಾಲೆಯಲ್ಲಿ ತಾರತಮ್ಯವಿಲ್ಲದೆ ಶಿಕ್ಷಣ ಕೊಡಲಾಗುತ್ತದೆ ಎಂದು ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಜಿ.ಸಿದ್ದರಾಜು ಹೇಳಿದರು. ಅವರು ಗುರುವಾರ ತಾಲ್ಲೂಕಿನ ದೇವರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಸರ್ವ ಶಿಕ್ಷಣ ಅಭಿಯಾನ, ಲಕ್ಷ್ಮೀಸಾಗರ ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಸರ್ವಶಿಕ್ಷಣ ಅಭಿಯಾನ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಸರ್ವ ಶಿಕ್ಷಣ [...]
May 19th, 2013 | Posted in ತುಮಕೂರು,ರಾಜ್ಯ ಸುದ್ದಿಗಳು | Read More »

ಹೆಚ್ಚಾಗಿ ಪಾನಕಗಳಿಗೆ ಸಕ್ಕರೆಯನ್ನು ಬಳಸಿ ಮಾಡುತ್ತಾರೆ, ಆದರೆ ಸಕ್ಕರೆಗಿಂತ ಬೆಲ್ಲ ಎಲ್ಲಾ ರೀತಿಯಲ್ಲೂ ಸೂಕ್ತ . ಸಕ್ಕರೆಯು ನಾಲಿಗೆಯನ್ನು ಸಿಹಿ ಮಾಡುತ್ತದೆ, ಅದು ದೇಹದ ತೂಕ ಹೆಚ್ಚಿಸುವ ಕೆಲಸದಲ್ಲಿ ಸದಾ ಮುಂದು. ಆದರೆ ಬೆಲ್ಲ ದೇಹದ ಆರೋಗ್ಯ ಕಾಪಾಡುವ ಸಿಹಿ. ಬೇಸಿಗೆಗೆ ಮಾಡುವ ಪಾನಕಗಳಲ್ಲಿ ಸಕ್ಕರೆ ಬದಲು ಬೆಲ್ಲ ಉಪಯೋಗಿಸಿ. ಕಬ್ಬಿನ ಹಾಳು ಕುಡಿದ ಭಾವ ಉಂಟಾಗುತ್ತದೆ ಮನಕ್ಕೆ, ನಾಲಿಗೆಗೆ ರುಚಿ , ದೇಹಕ್ಕೆ ಆರಾಮ .ಬೆಲ್ಲದಿಂದ ದೇಹಕ್ಕೆ ಮೆಗ್ನಿಶಿಯಂ ಸಿಗುತ್ತದೆ ಅದು ನರಗಳ ಆರೋಗ್ಯ [...]
May 19th, 2013 | Posted in Editor Only,ಆರೋಗ್ಯ ಮಾಹಿತಿ | Read More »
ನವದೆಹಲಿ (ವಿಶ್ವ ಕನ್ನಡಿಗ ನ್ಯೂಸ್ ) : ಮದುವೆಯಾಗಿ ಗಂಡನ ಮನೆಗೆ ಬರುವ ಸೊಸೆ ಕುಟುಂಬದ ಒಬ್ಬ ಸದಸ್ಯೆಯಾಗಿದ್ದು ಕುಟುಂಬದ ಸದಸ್ಯರಿಗೆ ಸಲ್ಲ ಬೇಕಾದ ಎಲ್ಲಾ ರೀತಿಯ ಸವಲತ್ತು ಮತ್ತು ಗೌರವ ಆಕೆಗೆ ಸಲ್ಲಬೇಕೆಂದು ಸುಪ್ರೀಂಕೋರ್ಟ್ ವಿಭಾಗೀಯ ಪೀಠ ಹೇಳಿದೆ. ಸೊಸೆಯನ್ನು ಮನೆಕೆಲಸದವಳಂತೆ ನಡೆಸಿಕೊಂಡು ಆಕೆಯನ್ನು ಮನೆಕೆಲಸಕ್ಕೆ ಸೀಮಿತಗೊಳಿಸುವ ಮತ್ತು ಕೆಲ ಕಾರಣಗಳಿಗಾಗಿ ಆಕೆಯನ್ನು ಮನೆಯಿಂದ ಹೊರಹಾಕುವ ಕಾರ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಪೀಠ ಇಂತಹ ಕೃತ್ಯ ಅಪರಾಧ ಎಂದು ಹೇಳಿದೆ. ವಿವಾಹಿತ ಮಹಿಳೆಯರ ಮೇಲೆ [...]
May 16th, 2013 | Posted in ದೆಹಲಿ,ರಾಷ್ಟ್ರೀಯ ಸುದ್ದಿಗಳು | Read More »
ಮಂಗಳೂರು : ಚಲಿಸುತ್ತಿದ್ದ ಬಸ್ಸಿನಿಂದ ಇಳಿಯಲು ಯತ್ನಿಸಿದ ಯುವಕ ಬಸ್ಸಿನ ಹಿಂಬದಿಯ ಚಕ್ರದಡಿ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಬೈಕಂಪಾಡಿಯಲ್ಲಿ ಇಂದು ನಡೆದಿದೆ . ಕುಂಜತ್ತಬೈಲ್ನಿಂದ ಕಾಟಿಪಳ್ಳಕ್ಕೆ ತೆರಳುತ್ತಿದ್ದ ಸಿಟಿ ಬಸ್ ಬೈಕಂಪಾಡಿ ಬಳಿ ಬಂದಾಗ ಬಸ್ಸಿನಲ್ಲಿದ್ದ ವ್ಯಕ್ತಿ ಬಸ್ ನಿಲ್ಲುವ ಮೊದಲೇ ಇಳಿಯಲು ಯತ್ನಿಸಿ ಬಸ್ಸಿನಿಂದ ಹಾರಿದ್ದಾನೆ. ಆ ಸಮಯದಲ್ಲಿ ನಿಯಂತ್ರಣ ತಪ್ಪಿದ ಆತ ಬಸ್ಸಿನ ಹಿಂಬದಿಯ ಚಕ್ರದಡಿ ಬಿದ್ದ ಕಾರಣ ಸ್ಥಳದಲ್ಲೇ ಮೃತ ಪಟ್ಟಿದ್ದು ಮೃತ ಯುವಕನ ಗುರುತು ಆ ಕ್ಷಣದಲ್ಲಿ ಪತ್ತೆಯಾಗಿಲ್ಲ. [...]
May 15th, 2013 | Posted in ದಕ್ಷಿಣ ಕನ್ನಡ,ರಾಜ್ಯ ಸುದ್ದಿಗಳು | Read More »

ಎದೆಯಾಳದಲ್ಲಿ ನೂರೊಂದು ಆಸೆಗಳು. ಆದರೆ ಅವೆಲ್ಲಾ ಪೂರ್ಣಗೊಳ್ಳುವುದು ಯಾವಾಗ…? ನನ್ನ ತಂದೆತಾಯಿಯನ್ನು ಚನ್ನಾಗಿ ನೋಡಿಕೊಳ್ಳಬೇಕು. ಚೆನ್ನಾಗಿ ಅಂದರೆ ? ಅವರಿಗೆ ಯಾವ ಕಷ್ಟವೂ ಕೊಡಬಾರದು. ನಮ್ಮ ತಾಯಿ ಕೈಗಳಿಂದ ಯಾವ ಮನೆಗೆಲವೂ ಮಾಡಿಸಬಾರದು, ನಮ್ಮ ತಂದೆಯವರಿಗೆ ದುಡಿಯಲು ಕಳುಹಿಸಬಾರದು. ಅವರಿಬ್ಬರಿಗೂ ಆದಷ್ಟು ಸಂತೋಷ ಕೊಡಬೇಕು. ನನ್ನ ಹೆಂಡತಿ ಮಕ್ಕಳನ್ನೂ ಚೆನ್ನಾಗಿ ನೋಡಿಕೊಳ್ಳಬೆಕು. ಅವರ ಪ್ರತಿಯೊಂದು ಆಸೆ ತೀರಿಸಬೇಕು. ಒಂದು ದಿನ ದೇವರು ಕಣ್ಣು ಬಿಟ್ಟಿ ನನ್ನ ಕಡೆ ನೋಡೇ ನೋಡುತ್ತಾನೆ. ನನ್ನ ಆಸೆಗಳನ್ನು ನಾನು ತೀರಿಸಿಯೇ [...]
May 14th, 2013 | Posted in Editor Only,ಚಿಂತನ ಮಂಥನ,ಲೇಖನಗಳು | Read More »

ಮಂಜಣ್ಣ ಇವತ್ತು ಯಾಕೋ ತುಂಬಾ ಬೇಸರವಾಗುತ್ತಿದೆ ಕಣ್ರಿ….. ಮನಸ್ಸು ಯಾವುದೋ ಸಂಕಷ್ಟಕ್ಕೆ ಸಿಲುಕಿದಾಗ, ಹಾಗಾಗೋದು ಸಹಜ ಕಣಪ್ಪಾ….ಈ ಪ್ರಪಂಚಗಲ್ಲಿ ಕಷ್ಟ-ಸುಖ ನಮಗಲ್ಲದೆ ಬಂಡೆಗಳಿಗೆ ಬರುತ್ತದೆಯೇ….ಬೇಸರದಿಂದ ಪರಾಗೋದಿಕ್ಕೆ ಒಂದು ಉಪಾಯ ಹೇಳ್ತೀನಿ ಕೇಳು….. ಮನಸ್ಸಿಗೆ ಬೇಸರ ಕಾಡುತ್ತಿದ್ದರೆ,ನಮ್ಮನ್ನು ನಾವು ಬೇರೆ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ತೋಟಗಾರಿಕೆ,ಕಸೂತಿಕೆಲಸ,ಚಿತ್ರಕಲೆ ಅಥವಾ ನಮಗೆ ಇಷ್ಟವಾದದ್ದನ್ನು ಮಾಡಿ ನಮ್ಮ ಮನಸ್ಸನ್ನು ಬೇರೆ ಕಡೆಗೆ ಪರಿವರ್ತಿಸಿಕೊಳ್ಳಬೇಕು. ಮನುಷ್ಯ ಸ್ನೇಹ ಜೀವಿ. ಒಂದಲ್ಲ ಒಂದು ರೀತಿ ಅವನಿಗೆ ನಂಟು ಬೇಕು. ನಮ್ಮ ಕುಟುಂಬದೊಂದಿಗೆ ಅಥವಾ ಸ್ನೇಹಿತರೊಂದಿಗೆ ನಲುಮೆಯಿಂದ ಬಾಳುವುದನ್ನು [...]
May 7th, 2013 | Posted in Editor Only,ಚಿಂತನ ಮಂಥನ,ಲೇಖನಗಳು | Read More »

ಸುಳ್ಯ ( ವಿಶ್ವ ಕನ್ನಡಿಗ ನ್ಯೂಸ್) : ಅಲ್ಪಸಂಖ್ಯಾತರ ಬಗ್ಗೆ ಕಾಳಜಿವಹಿಸಿ ಸುಬ್ರಹ್ಮಣ್ಯದಲ್ಲಿ ಬುರ್ಖಾ ವಿಚಾರದಲ್ಲಿ ಹಾಗೂ ಪಂಜದ ಮದರಸದ ವಿಚಾರದಲ್ಲಿ ಕಾಂಗ್ರೇಸ್ ಜನಪ್ರತಿನಿಧಿಗಳು ನೀಡಿರುವ ಸಹಕಾರವನ್ನು ಮರೆಯಲು ಸಾಧ್ಯವಿಲ್ಲ ಇದಕ್ಕಾಗಿ ಅಲ್ಪಸಂಖ್ಯಾತರು ಕಾಂಗ್ರೇಸ್ಸನ್ನು ಬೆಂಬಲಿಸಬೇಕೆಂದು ಸುಳ್ಯ ತಾಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಗಫೂರ್ ಕರೆನೀಡಿದ್ದಾರೆ. ಬೆಳ್ಳಾರೆಯಲ್ಲಿ ನಡೆದ ವಲಯ ಅಲ್ಪಸಂಖ್ಯಾತರ ಘಟಕದ ಸಭೆಯಲ್ಲಿ ಅವರು ಮಾತನಾಡಿದರು.ಅಲ್ಪ ಸಂಖ್ಯಾತರ ಘಟಕದ ಬೆಳ್ಳಾರೆ ವಲಯಾಧ್ಯಕ್ಷ ಅಂದುಂಞಿ ಬೆಳ್ಳಾರೆ, ಕೆ.ಪಿಸಿಸಿ ಸದಸ್ಯೆ ರಾಜೀವಿ ಆರ್ ರೈ, ಚಂದ್ರಶೇಖರ [...]
May 2nd, 2013 | Posted in ದಕ್ಷಿಣ ಕನ್ನಡ,ರಾಜ್ಯ ಸುದ್ದಿಗಳು | Read More »